Availability: 99
ಕೆ.ವಿ.
ಸುಬ್ಬಣ್ಣನವರು ಮರುರೂಪಿಸಿದ ಐದು ಸಂಸ್ಕ ತ ನಾಟಕಗಳ ಕನ್ನಡ ಆವೃತ್ತಿಗಳು ಇಲ್ಲಿ
ಸಂಕಲಿತಗೊಂಡಿವೆ. ಕಾಳಿದಾಸನ `ಅಭಿಜ್ಞಾನ ಶಾಕುಂತಲಮ್' ಆಧರಿಸಿದ `ಲೋಕಶಾಕುಂತಲ'
(೧೯೯೦), `ಮಾಲವಿಕಾಗ್ನಿಮಿತ್ರ' ಆಧರಿಸಿದ `ವಿದಿಶೆಯ ವಿದೂಷಕ' (೧೯೯೩), ವಿಶಾಖದತ್ತನ
`ಮುದ್ರಾರಾಕ್ಷಸ' ಆಧರಿಸಿದ `ಚಾಣಕ್ಯ ಪ್ರಪಂಚ', ಮತ್ತು ಬೋಧಾಯನ ಅಥವಾ
ಮಹೇಂದ್ರವಿಕ್ರಮವರ್ಮನ `ಭಗವದಜ್ಜುಕೀಯಮ್'ದ ಅನುವಾದ ಮತ್ತು ಅದೇ ಕೃತಿಯ
`ಸೂಳೆ-ಸನ್ಯಾಸಿ' (೧೯೭೭) ಎಂಬ ರೂಪಾಂತರ.ಇವುಗಳಲ್ಲಿ ನಾಲ್ಕು ಹಿಂದೆ ಪ್ರಕಟಗೊಂಡಿದ್ದು
ಈಗ ಲಭ್ಯ ವಿರಲಿಲ್ಲ; ಇನ್ನು ಉಳಿದ ಒಂದು ೧೯೮೮ರಲ್ಲೇ ರಚಿತವಾಗಿದ್ದರೂ ಈವರೆಗೂ
ಹಸ್ತಪ್ರತಿಯ ರೂಪದಲ್ಲೇ ಉಳಿದಿತ್ತು. ಸಾಹಿತ್ಯಾಸಕ್ತರಿಗೂ ರಂಗಸಹೃದಯರಿಗೂ ಒಟ್ಟಿಗೆ
ಸಿಗಲೆಂಬ ಇರಾದೆಯಿಂದ ಈ ಬಗೆಯ ಸಂಕಲನದಲ್ಲಿ ಈ ಕೃತಿಗಳು ಹೊರಬರುತ್ತಿವೆ.ಈ ಎಲ್ಲ
ಅನುವಾದ/ರೂಪಾಂತರಗಳೂ ನಡೆದಿದ್ದು ನಿರ್ದಿಷ್ಟ ರಂಗಪ್ರಯೋಗಗಳ ಅಗತ್ಯಕ್ಕಾಗಿ. ಮತ್ತು,
ಇವೆಲ್ಲವೂ ಮೂಲವನ್ನಾಧರಿಸಿ ಕಟ್ಟಿರುವ ಮರುರೂಪಗಳೇ ಹೊರತು ನೇರ ಅನುವಾದಗಳಲ್ಲ. ಸಂಸ್ಕ ತ
ಸಾಹಿತ್ಯದ ಮೇರುಕೃತಿಗಳನ್ನು ಕನ್ನಡದ/ಭಾರತದ ಸಮಕಾಲೀನ ಬೌದ್ಧಿಕ ಸಂದರ್ಭಗಳಿಗೆ
ಸಂವಾದಿಯಾಗುವಂತೆ ಹೊಸ ರೂಪಗಳಲ್ಲಿ ಇಟ್ಟು ನೋಡುವ ಪ್ರಯೋಗವು ಈ ಎಲ್ಲ ರೂಪಾಂತರಗಳ
ಸ್ಥಾಯೀಗುಣ.
Attributes | |
Author | ಕೆ.ವಿ. ಸುಬ್ಬಣ್ಣ |
Number of pages | 344 |
Year of Publication | 2020 |